
ನನ್ನ ಮೊಗದಲ್ಲಿ ನಗುವಿಲ್ಲ, ಕಣ್ಣಿಗೆ ನಿದ್ದೆಯಿಲ್ಲ,
ಒಂಟಿತನ ನನ್ನನ್ನು ಒಳಗೊಳಗೆ ತಿನ್ನುತ್ತಿದೆ
ಗೆಳತಿ ನಿನಗಾಗಿಯೇ ಸಿಂಗರಿಸಿಕೊಂಡಿದ್ದು
ವ್ಯರ್ಥವಾಯಿತೇ ? ಅರ್ಥವಿಲ್ಲದೇ ಹೋಯಿತೇ ?
ನನ್ನ ಸ್ವಾರ್ಥದ ಕಹಿನೆರಳಲ್ಲಿ, ನಿನ್ನ ಕೄತಕ
ಭಾಂದವ್ಯದ ಬಂಧನದಲ್ಲಿ ಹೇಗೆ
ಅರಳುವುದೋ ನಮ್ಮ ಪ್ರೇಮಬಳ್ಳಿ ?
ನಿನ್ನೊಳಗೆ ಅನೇಕ ಚಿತ್ತಾರಗಳಿದ್ದರೂ
ನನ್ನ ಚಿತ್ರವೇಕಿಲ್ಲ ?
ನಿನ್ನ ಸ್ಥಿತಿ ಪ್ರಜ್ಞೆ - ಮೌನಕ್ಕೆ
ನೆಲೆಯಿಲ್ಲ - ಬೆಲೆಯಿಲ್ಲ !
ನನ್ನೀ ಬರಡು ಬದುಕಿನ ಮೊದಲ ಗೆಳತಿ ನೀ
ಬತ್ತಿಹೋದ ನೆನಪುಗಳು ಚಿಗುರೊಡೆಯ ಬೇಕು
ನೀ ನನ್ನ ಬಿಟ್ಟರು ನಾ ನಿನ್ನ ಬಿಡಲೊಲ್ಲದು
ತೊರೆಯದಿರು ಪ್ರೀತಿಯ ಮರೆಯದಿರು,
thumba chennagidhe kanri..
ReplyDeleteನನ್ನ ಮಾತಿಗೆ ಅಂತು ಬೆಲೆ ಇದೆ ಅಂತಾಯ್ತು :) "ನಿನ್ನೊಳಗೆ ಅನೇಕ ಚಿತ್ತಾರಗಳಿದ್ದರೂ ನನ್ನ ಚಿತ್ರವೇಕಿಲ್ಲ ?" ಈ ಸಾಲು ಇಷ್ಟವಾಯಿತು... ಬ್ಲಾಗ್ ಲೋಕಕ್ಕೆ ಸ್ವಾಗತ, ಹೀಗೆ ಬರೆಯುತ್ತಾ ಇರಿ :)
ReplyDeleteನಂದನ್,
ReplyDeleteಬ್ಲಾಗ್ ತೆರೆದು ಒಂದು ಮಾತನ್ನು ಹೇಳದೆ ಇದ್ದಿದ್ದು ಎಷ್ಟರ ಮಟ್ಟಿನ ನ್ಯಾಯ?
"ನನ್ನ ಸ್ವಾರ್ಥದ ಕಹಿನೆರಳಲ್ಲಿ, ನಿನ್ನ ಕೄತಕ
ಭಾಂದವ್ಯದ ಬಂಧನದಲ್ಲಿ ಹೇಗೆ
ಅರಳುವುದೋ ನಮ್ಮ ಪ್ರೇಮಬಳ್ಳಿ ?"
ಈ ಸಾಲುಗಳು ತುಂಬಾ ಇಷ್ಟವಾಯಿತು...
ಬ್ಲಾಗುಲೋಕಕ್ಕೆ ವೆಲ್ಕಮ್ಮು..
ReplyDeleteಬರೆಯುತ್ತಿರಿ..
ಬೆಳೆಯುತ್ತಿರಿ..:)
ಶ್ರೀ ಅವರೇ,
ReplyDeleteತುಂಬಾ ದನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ...
ಕಂಡಿತಾ ಕಲ್ಮನೆ ಅಣ್ಣ :) ನಿಮ್ಮ ಸಲಹೆ ಅಗತ್ಯ :)..
ReplyDeleteಕ್ಷಮಿಸಿ ಮಂಜು ಅಣ್ಣ, ಕೆಲಸದ ಒತ್ತಡ ಮದ್ಯ ಆಗಿಲ್ಲ ನಿಮ್ಮ ಪ್ರೋತ್ಸಾಹ ಅಗತ್ಯ, ಸಂತೋಷ ನಿಮ್ಮ ಕಾಮೆಂಟ್ಸ್ ಗೆ..ಕುಶಿ ಆಯ್ತು ನಿಮ್ಮ ಕಾಮೆಂಟ್ಸ್ ನೋಡಿ ..
ReplyDeleteನೀಲಿ ಹೂವಿನ ಅಣ್ಣ ನಮಸ್ತೆ, ನಿಮ್ಮ ಆಶೀರ್ವಾದ ಅಣ್ಣ, ಥ್ಯಾಂಕ್ಸ್ ...
ReplyDelete